Friday 31 October 2014

ಅಕ್ಟೋಬರ್ 31 ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮ ವಾರ್ಷಿಕ 


        ಬ್ರಿಟಿಷರ ನಿದ್ದೆಗೆಡಿಸಿದ್ದ 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಇಂದು. ಈ ದಿನವನ್ನು ಭಾರತ ಸರಕಾರ 'ರಾಷ್ಟ್ರೀಯ ಏಕತಾ ದಿನ' ವನ್ನಾಗಿ ಆಚರಿಸುತ್ತಿದೆ. ಶಾಲೆಗಳಲ್ಲಿ ಅ.31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನವನ್ನು ಆಚರಿಸುವ ಮೂಲಕ ಮಕ್ಕಳಿಗೆ ಪಟೇಲ್ ಅವರ ಜೀವನ, ಸಾಧನೆಗಳ ಮಹತ್ವ ತಿಳಿಸಿಕೊಡಬೇಕಾದುದು ನಮ್ಮೆಲ್ಲರ ಹೊಣೆ.
      ಹಲವಾರು ಮಹಾನುಭಾವರ ತ್ಯಾಗ ಬಲಿದಾನಗಳ ಮೂಲಕ ಗಳಿಸಿದ ಭಾರತದ ಸ್ವಾತಂತ್ರ್ಯದ ಇತಿಹಾಸ ರೋಚಕವಾದದ್ದು. ದೇಶ ಸ್ವಾತಂತ್ರ್ಯಗಳಿಸುವ ನಿಟ್ಟಿನಲ್ಲಿ ಚಳುವಳಿಗೆ ಧುಮುಕಿ ಹೋರಾಟ ನಡೆಸಿದವರು ಅಸಂಖ್ಯಾತ ಮಂದಿ. ಅವರಲ್ಲಿ "ಭಾರತದ ಉಕ್ಕಿನ ಮನುಷ್ಯ" ಎಂದೇ ಕರೆಸಿಕೊಂಡ ವಲ್ಲಭಭಾಯಿ ಪಟೇಲ್ ಕೂಡಾ ಪ್ರಮುಖರು.
          ಗುಜರಾತಿನ  ನಡಿಯಾಡ್ ಗ್ರಾಮದಲ್ಲಿ ಝವೇರ್‌ ಭಾಯಿ ಮತ್ತು ಲಾಡ್‌ಬಾಯಿ ದಂಪತಿಗಳ ಸುಪುತ್ರರಾಗಿ ರೈತರ ಕುಟುಂಬದಲ್ಲಿ ಜನಿಸಿದ ಅವರು, 1917ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಹಮದಾಬಾದ್‌ನ ನೈರ್ಮಲ್ಯ ಆಯಕ್ತರಾಗಿ ಆಯ್ಕೆಯಾದರು. ವಲ್ಲಭಭಾಯಿಯವರಿಗೆ ರಾಜಕೀಯದಲ್ಲಿ ಇಷ್ಟವಿರಲಿಲ್ಲ. ಚಂಪಾರಣ್ಯದಲ್ಲಿ ಗಾಂಧಿ ನೇತೃತ್ವದಲ್ಲಿ ರೈತರ ಪರವಾಗಿ ಬ್ರಿಟಿಷರ ವಿರುದ್ದ ನಡೆಸಿದ ಹೋರಾಟದಲ್ಲಿ ಜಯ ಸಾಧಿಸಿದ ರೀತಿಯನ್ನು ಕಂಡು ಪ್ರಭಾವಿತರಾದ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಚಳುವಳಿಗೆ ಧುಮುಕುವುದಾಗಿ ಘೋಷಿಸಿದರು. ಪ್ರಪ್ರಥಮ ಬಾರಿಗೆ 1917ರಲ್ಲಿ ಗುಜರಾತ್‌ನ ಬೋರ್ಸಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಲ್ಲಭಭಾಯಿ ಪಟೇಲರು, ರಾಷ್ಟ್ರಾದ್ಯಂತ ಗಾಂಧೀಜಿಯವರ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂಬ ಮನವಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
        'ಕರ ನಿರಾಕರಣೆ' ಆಂದೋಲನದ ಅಂಗವಾಗಿ ಖೇಡಾ ಜಿಲ್ಲೆಯ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ತೆರಿಗೆ ನೀಡುವುದನ್ನು ತಿರಸ್ಕರಿಸುವಂತೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಕೆಂಡಾಮಂಡಲವಾದ ಸರಕಾರ ಸಾವಿರಾರು ರೈತರನ್ನು ಬಂಧಿಸಿತು. ಇದರಿಂದ ದೇಶಾದ್ಯಂತ ಅನುಕಂಪದ ಅಲೆ ಮೂಡಿ ಬಂದ ಹಿನ್ನೆಲೆಯಲ್ಲಿ ಸರಕಾರ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿ ರೈತರ ಒಂದು ವರ್ಷದ ತೆರಿಗೆಯನ್ನು ರದ್ದುಗೊಳಿಸಿತು.
        ಗಾಂಧೀಜಿಯವರ ಅಸಹಕಾರ ಚಳವಳಿಯನ್ನು ಬೆಂಬಲಿಸಿದ ಪಟೇಲ್ 3 ಲಕ್ಷ ಕಾರ್ಯಕರ್ತರ ಪಡೆಯನ್ನು ಸಿದ್ಧಗೊಳಿಸಿ 1.5 ಮಿಲಿಯನ್ ಹಣವನ್ನು ಸಂಗ್ರಹಿಸಿದರು. ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿ ತಾವು ಸ್ವತಃ ಖಾದಿ ಬಟ್ಟೆಗೆ ಮಾರು ಹೋದರು.ರಾಷ್ಟ್ರ ನಿರ್ಮಾಣಕ್ಕಾಗಿ ಭಾರತೀಯ ಅಡಳಿತಾತ್ಮಕ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರ ಸೇವೆಗಳನ್ನು ಆರಂಭಿಸಿ ಉಕ್ಕಿನ ಮನುಷ್ಯರೆಂದು ಖ್ಯಾತಿಪಡೆದ ಸರ್ದಾರ್ ವಲ್ಲಭಭಾಯಿ ಪಟೇಲರು 1950ರಲ್ಲಿ ನಿಧನ ಹೊಂದಿದರು. ಆದರೆ ಅವರ ಧೈರ್ಯ ಸಾಹಸಗಳು ಜನಮಾನಸದಲ್ಲಿ ಇನ್ನೂ ಚಿರಸ್ಥಾಯಿಯಾಗಿ ಉಳಿದಿದೆ.


ಜನ್ಮ ವಾರ್ಷಿಕ ದಿನದಂದು ಈ ಮಹಾನ್ ನಾಯಕನಿಗೆ ಅನಂತ ವಂದನೆಗಳು.  

Thursday 30 October 2014

അംഗീകാരത്തികവിൽ അഭിമാനത്തോടെ...

ഒരു സന്തോഷവാർത്ത, വളരെ അഭിമാനത്തോടെ ഞങ്ങൾ ബ്ലോഗുവായനക്കാരുമായ്‌ പങ്കുവെയ്കട്ടെ. മഞ്ചേശ്വരം ഉപജില്ലയിലെ മികച്ച “സ്കൂൾബ്ലോഗിനുള്ള” ഒന്നാം സ്ഥാനം ഞങ്ങൾ നേടിയിരിക്കുന്നു . ഇത് ഒരു കൂട്ടായ്മയുടെ വിജയമാണ് . ഒരു കുഗ്രാമത്തിലെ ഒരറ്റത്ത് ‘പാറയോരം’ ചേർന്ന് നിൽക്കുന്ന ഞങ്ങളുടെ പള്ളിക്കൂടത്തിന്, നാട്ടുകാർ ഓമനപ്പേരിട്ടു വിളിക്കുന്ന പാറശാലയ്ക്ക് ഈ അംഗീകാരം നൽകുന്നത് കൂടുതൽ ഉണർവ്വും ഉത്തരവാദിത്വങ്ങളുമാണ്. ചുരുക്കം കുട്ടികളേ ഉള്ളു ഏങ്കിലും അവർക്കായ് പഠനത്തിൻറെയും പാഠേൃതര പ്രവർത്തനങ്ങളുടെയും വാതായനങ്ങൾ ഞങ്ങളെന്നും മലർക്കെ തുറന്നിട്ടിരിക്കുന്നു. അത്തരം ജീവസ്സുറ്റ പ്രവർത്തനങ്ങളുടെ തെളിച്ചങ്ങൾ ഞങ്ങൾ ബ്ലോഗിലൂടെ കാഴ്ച്ചക്കാർക്കായ്, വായനക്കാർക്കായ് പങ്കുവെയ്ക്കുന്നുമുണ്ട്. വിദ്യാഭ്യാസപരമായും സാംസ്കാരികമായും സാമ്പത്തികമായും പിന്നാക്കം നിൽക്കുന്ന ഒരു പ്രദേശത്തിലെ രക്ഷകർത്താക്കൾ, വിശ്വസിച്ചേൽപ്പിച്ച മക്കളെ, വിദ്യാഭ്യാസ പ്രവർത്തനങ്ങളിലൂടെ സംസ്കരിച്ച് മികച്ച കുട്ടികളാക്കി അവർക്കു തിരികെ നൽകാൻ ഞങ്ങൾ പ്രതിജ്ഞാബദ്ധരാണ്. ഈ പ്രവർത്തനങ്ങൾക്കുള്ള അംഗീകാരം ഞങ്ങളെ കൂടുതൽ എളിമയുള്ളവരാക്കുന്നു. അതോടൊപ്പം കൂടുതൽ പ്രവർത്തന സജ്ജരാകാനും ഉദ്ബോധിപ്പിക്കുന്നു...

അംഗീകാരം ഞങ്ങൾ വിനയപൂർവ്വം സ്വീകരിക്കുന്നു.  
വായനക്കാർക്ക്...
കൂടേ നടന്നവർക്ക്...
മാർഗനിർദ്ദേശകർക്ക്‌...
പ്രോത്സാഹിപ്പിച്ചവർക്ക്...
         ഞങ്ങളുടെ സ്നേഹാഭിവാദ്യങ്ങൾ...   
 
                                                                 ബ്ലോഗ്‌ ടീം
                                                                            ജി.ബി.എൽ.പി.എസ് ഹേരൂർ

Monday 27 October 2014


VIDYARANGA KALA SAHITHYA VEDIKE, MANJESHWAR SUB DIST
SAHITHYOLSAVAM 2014 @ GHSS MANGALPADY – 27.10.2014
Click here for RESULTS..!!!


Thursday 23 October 2014

ನಮ್ಮ ಶಾಲಾ ಪುಟಾಣಿಗಳು ದೀಪಾವಳಿ ಹಬ್ಬ ಆಚರಿಸಿದರು... 
Diwali fest celebrated in our school 
ദീപാവലി പ്രഭാ പൂരത്തില്‍......



നിറയട്ടെ വെളിച്ചം മനസ്സിലും..




Wednesday 22 October 2014

 ಬಾಳಿನ ಕತ್ತಲು ಕಳೆದು ಬೆಳಕು ಮೂಡಿಸುವ ದೀಪಾವಳಿ...




            ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ.  ದೀಪ + ಅವಳಿ ಎಂದರೆ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ. ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು.ಇದು ಕಾರ್ತೀಕ ಮಾಸದ ಹಬ್ಬವೇ ಆದರೂ ಅಶ್ವೀಜ ಕೃಷ್ಣ ತ್ರಯೋದಶಿಯ ಸಂಜೆಯಿಂದಲೇ ದೀಪಾವಳಿಯ ಸಂಭ್ರಮ. ದೀಪಾವಳಿ ಮೂರು ದಿನಗಳ ಹಬ್ಬವಾದರೂ, ಸತತ ೫ ದಿನಗಳ ಸಡಗರ. ತ್ರಯೋದಶಿಯ ಸಂಜೆ ಸ್ನಾನದ ಮನೆಯನ್ನು ಚೆನ್ನಾಗಿ ಶುದ್ಧಮಾಡಿಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು , ರಂಗವಲ್ಲಿ ಹಾಕಿ ಶುಚಿಯಾದ ನೀರು ತುಂಬುತ್ತಾರೆ. ಇದಕ್ಕೇ ಈ ಹಬ್ಬಕ್ಕೆ ನೀರು ತುಂಬವ ಹಬ್ಬ ಎಂದೇ ಹೆಸರು ಬಂದಿದೆ. ಮಾರನೇ ದಿನ ನರಕ ಚತುರ್ದಶಿ. ಅಂದು ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬುದು ಹಿರಿಯರ ನಂಬಿಕೆ.
        ಪುರಾಣಗಳ ರೀತ್ಯ ನರಕಾಸುರನೆಂಬ ರಕ್ಕಸನು ಲೋಕಕಂಟಕನಾದಾಗಭೂಮಾತೆ ಕೃಷ್ಣನನ್ನು ಪ್ರಾರ್ಥಿಸಿ ನರಕಾಸುರನ ಸಂಹಾರಕ್ಕೆ ಕಾರಣಳಾಗುತ್ತಾಳೆ. ಕೃಷ್ಣ ಕೂಡ ನರಕಾಸುರನ ಸಂಹಾರಕ್ಕೆ ಮುನ್ನ ಅಶ್ವೀಜ ಕೃಷ್ಣ ಚತುರ್ದಶಿಯ ದಿನ ತೈಲಾಭ್ಯಂಜನ ಮಾಡಿ,ನರಕಾಸುರನ ವಧಿಸಿಆ ರಕ್ಕಸ ಬಂಧಿಸಿಟ್ಟಿದ್ದ ೧೬ ಸಾವಿರ ಕನ್ಯೆಯರನ್ನು ಬಿಡುಗಡೆಗೊಳಿಸುತ್ತಾನೆ. ಆ ನೆನಪಿಗಾಗಿ ದೀಪಾವಳಿಯ ಆಚರಣೆ.
ಈ ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುವ ಹಬ್ಬವೇ ದೀಪಾವಳಿ. ಹೀಗಾಗೇ ಅಂದು ಹಬ್ಬದೂಟ ಮಾಡಿಬಾಣಬಿರುಸು ಹಚ್ಚಿ ನಲಿಯುವುದು ವಾಡಿಕೆ. ತಮ್ಮ ಬಿಡುಗಡೆಯ ಬಳಿಕ ಕೃಷ್ಣನಿಗೆ ಕೃತಜ್ಞತೆ ಅರ್ಪಿಸಲು ೧೬ ಸಾವಿರ ಕನ್ಯೆಯರು ಭಕ್ತಿಯಿಂದ ಸಾಲು ಸಾಲು ಆರತಿ ಬೆಳಗಿದರೆಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಅಂದಿನಿಂದ ಮಹಿಳೆಯರು ಆರತಿ ಬೆಳಗುವಸಾಲು ದೀಪ ಹಚ್ಚುವ, ತೈಲಾಭ್ಯಂಜನ ಮಾಡುವ ಪದ್ಧತಿ ರೂಢಿಗೆ ಬಂತು. ಮಾರನೆಯ ದಿನ ಅಮಾವಾಸ್ಯೆ. ಅಂದು ಸಂಜೆ ಎಲ್ಲರೂ ಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಸಾಮಾನ್ಯವಾಗಿ ಅಮಾವಾಸ್ಯೆ ಅಶುಭ ಎಂದು ಹೇಳುತ್ತಾರಾದರೂ, ಭಾರತೀಯ ಸಂಪ್ರದಾಯದಲ್ಲಿ ಅಮಾವಾಸ್ಯೆಗೆ ಮಹತ್ವ ಇದೆ. ಭೀಮನ ಅಮಾವಾಸ್ಯೆಯಂದು ಸುಮಂಗಲಿಯರು ತಮ್ಮ ಮಾಂಗಲ್ಯ ರಕ್ಷಣೆಗಾಗಿ ಪೂಜಿಸುತ್ತಾರೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂಸುವರ್ಣವನ್ನೂ ಕಳಶದ ಜೊತೆ ಇಟ್ಟುಧನದೇವತೆಯಾದ ಲಕ್ಷ್ಮೀಯನ್ನು ಪೂಜಿಸಿಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಅಂಗಡಿಗಳಲ್ಲೂ ಲಕ್ಷ್ಮೀಪೂಜೆ ವಿಜೃಂಭಣೆಯಿಂದ ನಡೆಯುತ್ತದೆ.  ದೀಪಾವಳಿ ಹಬ್ಬ ಹಿಂದು ಧರ್ಮದಲ್ಲೇ ಬಹುದೊಡ್ಡ  ವೈಶಿಷ್ಟ ಪೂರ್ಣವಾದ ಹಬ್ಬವಾಗಿದೆ. ಬೆಳಕಿನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ದೀಪಗಳ ಹಬ್ಬ ದೀಪಾವಳಿ ಮೂರು ದಿನಗಳ ಹಬ್ಬ. ಎಲ್ಲಿ ನೋಡಿದರೂ ದೀಪಗಳ ಸಾಲು. ಕತ್ತಲೆ ಮಾಯವಾಗಿ ಎಲ್ಲೆಲ್ಲೂ  ಬೆಳಕು ಚೆಲ್ಲಿರುತ್ತದೆ. ಈ ದೀಪಗಳನ್ನು ಬೆಳಗುವುದರಿಂದ ಮಾನವನ ಪಾಪಗಳು ದೂರವಾಗಿ ಆತನಿಗೆ ವಿಶೇಷವಾದ ಪುಣ್ಯ ಸಿಗುತ್ತದೆ ಎಂಬುದಾಗಿ ಶಾಸ್ತ್ರಕಾರರ ಅಭಿಮತವಾಗಿದೆ.ಯಾವ ಮನೆಯಲ್ಲಿ  ಪ್ರತಿನಿತ್ಯವೂ ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೂ ದೀಪ ಬೆಳಗುತ್ತದೆಯೋ ಆ ಮನೆಯಲ್ಲಿ  ಸುಖಸಂಪತ್ತು ಸಮೃದ್ಧಿಯಾಗಿರುತ್ತದೆ. ಮತ್ತೆ ಅಂತಹ ಮನೆಗಳಲ್ಲಿ  ದಾರಿದ್ರ ಸುಳಿಯುವುದಿಲ್ಲ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ  ದೀಪಕ್ಕೆ ವಿಶೇಷ ಮಹತ್ವವಿದೆ.
    
     ತಾನು ಉರಿದು ಲೋಕಕ್ಕೆ ಬೆಳಕು ನೀಡುವ ಪರಂಜ್ಯೋತಿಯನ್ನು ಅನುಕರಿಸುತ್ತಾ ಮನುಷ್ಯರಾದ ನಾವು ಕೂಡ ಸ್ವಾರ್ಥವನ್ನು ಮರೆತು ಜ್ಯೋತಿಯಂತೆ ಇತರರಿಗೆ ನೆರವಾಗೋಣ. ಹಾಗೆನೇ ಇನ್ನೊಂದು ವಿಚಾರ, ದೀಪಾವಳಿ ಹಬ್ಬದಂದು ದೀಪಗಳನ್ನು ಬೆಳಗಿಸುವುದು ಸಾಮಾನ್ಯ. ದೀಪ ಉರಿಸಲು ಲೋಹದ ಪಿಂಗಾಣಿ ಬದಲಿಗೆ ಮಣ್ಣಿನ ಹಣತೆಗಳನ್ನು ಬಳಸಿ. ಇದರಿಂದ ಹಣತೆ ತಯಾರಿಸಿ ಜೀವನ ಸಾಗಿಸುವ ಕುಂಬಾರರಿಗೂ ಸಹಾಯವಾಗುತ್ತದೆ ಹಾಗೂ ನಾವು ಬೆಳಗಿಸಿದ ದೀಪಕ್ಕೂ ಒಂದು ಶ್ರೇಷ್ಠತೆ ಇರುತ್ತದೆ.

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
"ಅಸತೋಮ ಸದ್ಗಮಯ
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
..."

|| ಶುಭಮಸ್ತು ||


ಸಂಗ್ರಹ: ಬಲ್ಲ ಮೂಲಗಳಿಂದ
ಫೋಟೋ: ಗೂಗಲ್

Monday 20 October 2014

Congartulations..!!!
മഞ്ചേശ്വരം ഉപജില്ലാ ശാസ്ത്ര മേളയില്‍ സാമൂഹ്യ ശാസ്ത്ര CHART പ്രദര്‍ശന മത്സരത്തില്‍ A ഗ്രേഡ് ഒന്നാം സമ്മാനം നേടിയ വിദ്യാര്‍ഥികള്‍.

സുമന , ഉമ്മര്‍

Manjeshwar Sub Dist level School Social Sc Fair winners of our school, Sumana and Ummer with First place in charts event bringing Second overall championship in LP Social Science fair...
                                                                   Gud Luck for Dist level...wishes from HM, Staff, PTA

Wednesday 15 October 2014

ಅಕ್ಟೋಬರ್ 15; ಎ. ಪಿ. ಜೆ ಅಬ್ದುಲ್ ಕಲಾಂ ಜನ್ಮದಿನ 



      ಎ. ಪಿ. ಜೆ ಅಬ್ದುಲ್ ಕಲಾಂ ಭಾರತದ ಮಾಜಿ ರಾಷ್ಟ್ರಪತಿ ಎಂಬುದು ಎಲ್ಲರಿಗೂ ಗೊತ್ತು. ಸದಾ ಕ್ರಿಯಾಶೀಲ ವಿಜ್ಞಾನಿಯಾಗಿದ್ದ ಅಬ್ದುಲ್ ಕಲಾಂ ತಮ್ಮ ವೈಜ್ಞಾನಿಕ ಕೆಲಸ, ಚಿಂತನೆಗಳ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ. ಅಬ್ದುಲ್ ಕಲಾಂ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇ ಬೇಕಾದ 5 ಸತ್ಯಗಳು ಇಲ್ಲಿವೆ ನೋಡಿ.

1. 1998 ರ ಭಾರತದ ಅಣು ಅಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಅಬ್ದುಲ್ ಕಲಾಂ. ಈ ಐತಿಹಾಸಿಕ ಸಾಧನೆಯಿಂದ ಏಕಾಏಕಿ ಪ್ರಸಿದ್ಧರಾದ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ.
2. ರಾಷ್ಟ್ರಪತಿ ಆಗುವುದಕ್ಕಿಂತ ಮುನ್ನ ಸರ್ಕಾರಿ ಸಂಸ್ಥೆಗಳಾದ ಡಿ.ಆರ್.ಡಿ.ಓ ಮತ್ತು ಇಸ್ರೋದಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕಲಾಂ ಅಲ್ಲಿ ಅತ್ಯಾಧುನಿಕ ಕ್ಷಿಪಣಿ ಮತ್ತು ಉಡ್ಡಯನ ವಾಹನವನ್ನ ಅಭಿವೃದ್ಧಿಪಡಿಸಿದ್ದರು, ಹೀಗಾಗಿಯೇ ಅಬ್ದುಲ್ ಕಲಾಂ `ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ.
3. ಶಾಲಾ ದಿನಗಳಲ್ಲಿ ಅಬ್ದುಲ್ ಕಲಾಮ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ.
4. ಶಾಲೆ ಮುಗಿದ ಬಳಿಕ ನ್ಯೂಸ್ ಪೇಪರ್ ಮಾರಾಟ ಮಾಡಿ ಬಂದ ಹಣವನ್ನ ತಂದೆಗೆ ನೀಡಿ ಅವರ ಖರ್ಚಿನ ಭಾರ ತಗ್ಗಿಸುತ್ತಿದ್ದ ಅಬ್ದುಲ್ ಕಲಾಂ
5. 1998ರಲ್ಲಿ ಹೃದಯ ತಜ್ಞ ಡಾ. ಸೋಮರಾಜು ಸಹಕಾರ ಪಡೆದು ಕಡಿಮೆ ಖರ್ಚಿನ ಕರೋನರಿ ಸ್ಟೆಂಟ್ (ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ನಿವಾರಣೆಗೆ ಬಳಸುವ ಉಪಕರಣ) ಅನ್ನ ಅಭಿವೃದ್ಧಿಪಡಿಸಿದ ಸಾಧನೆ ಅಬ್ದುಲ್ ಕಲಾಂ ಅವರದ್ದು, ಜೊತೆಗ, ಇಬ್ಬರೂ ಸೇರಿ ಆರೋಗ್ಯ ತಪಾಸಣೆ ನಡೆಸಬಲ್ಲ ಸುಲಭ ಸಾಧನವಾದ ಟ್ಯಾಬ್ಲೆಟ್ ಪಿಸಿಯನ್ನ ಅಭಿವೃದ್ಧಿಪಡಿಸಿದ್ದರು. ಈ ಟ್ಯಾಬ್ಲೆಟ್ ಗೆ ಕಲಾಮ್-ರಾಜು ಟ್ಯಾಬ್ಲೆಟ್ ಎಂದೇ ಹೆಸರು ನೀಡಲಾಗಿದೆ.
ಇಂತಹ ಮಹಾನ್ ವ್ಯಕ್ತಿ ಅಬ್ದುಲ್ ಕಲಾಂ ಇಂದು 83 ನೇ ವಸಂತಕ್ಕೆ ಕಾಲಿರಿಸಿದ್ದಾರೆ. 

ನೆಚ್ಚಿನ ಅಬ್ದುಲ್ ಕಲಾಂರವರಿಗೆಗೆ ನಮ್ಮ ಬ್ಲಾಗ್  ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು. 

Monday 13 October 2014

ರಾಜ್ಯ ಕ್ರೀಡಾ ದಿನಾಚರಣೆಯಂಗವಾಗಿ ಆಯೋಜಿಸಲಾದ ಸ್ಪರ್ಧೆಗಳು 
സംസ്ഥാന കായിക ദിനാചരണത്തോടനുബന്ധിച്ചു നടന്ന കായിക മത്സര പരിപാടിയില്‍ നിന്ന്.







Wednesday 8 October 2014

60 ನೇ ವನ್ಯಜೀವಿ ಸಪ್ತಾಹ ಆಚರಣೆ... 




       ಮನುಷ್ಯರಂತೆ ಎಲ್ಲಾ ಪ್ರಾಣಿಗಳಿಗೂ, ಸಸ್ಯಗಳಿಗೂ ಭೂಮಿಯಲ್ಲಿ ಬದುಕುವ ಹಕ್ಕಿದೆ. ಆಧುನಿಕ ಮನುಷ್ಯ ತನ್ನ ಹೊರತು ಇತರ ಪ್ರಾಣಿ ಪಕ್ಷಿಗಳ ಬಗ್ಗೆ ಚಿಂತಿಸುತ್ತಿಲ್ಲ. ವನ್ಯಜೀವಿ ಸಪ್ತಾಹವನ್ನು  ಸರಕಾರೀ ಸಂಸ್ಥೆ ಗಳಲ್ಲಿ ಹೆಸರಿಗಾದರೂ ಆಚರಿಸುತ್ತಿದ್ದಾರಲ್ಲಾ ಅಂತ ಖುಷಿ ಪಡುವ ವಿಷಯ ಒಂದಾದರೆ, ಸಕಲ ವನ್ಯಜೀವಿಗಳೂ ನಾಮಾವಶೇಷವಾಗಲು ಮನುಷ್ಯ ದಾಪುಗಾಲು ಹಾಕಿ ಮುನ್ನುಗುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ.  ಮನುಷ್ಯನ ಅತಿಯಾದ ದುರಾಸೆಯಿಂದ ಕಾಡು ನಾಶವಾಗುತ್ತಿದೆ. ಪ್ರಕೃತಿ ನಾಶಕ್ಕೆ ಮೂಲ ಕಾರಣಕರ್ತನೇ ಮನುಷ್ಯ ಎಂಬ ಜೀವಿ. ಈಗಾಗಲೇ ನಗರ ಪ್ರದೇಶಗಳಲ್ಲಿ ಆಮ್ಲಜನಕವನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿ ಬಂದಿದ್ದು ಹೀಗೆಯೇ ಪರಿಸರ ನಾಶವಾದರೇ ನಮ್ಮ ಮಲೆನಾಡಿನಲ್ಲಿಯೂ ಇಂತಹ ಪರಿಸ್ಥಿತಿ ಬರಬಹುದು. ಇದರ ಬಗ್ಗೆ ಎಲ್ಲರೂ ಜಾಗೃತಿ ವಹಿಸುವ ಕಾಲ ಸನ್ನಿಹಿತವಾಗಿದೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಲು ಮುಂದಾಗಬೇಕಿದೆ. ಮುಂದಿನ ಪೀಳಿಗೆಯು ಅರಣ್ಯ ಸಂರಕ್ಷಣೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿರುವುದರಿಂದ ವಿದ್ಯಾರ್ಥಿಗಳಲ್ಲಿ  ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ October 1 ರಿಂದ 7 ರ ವರೆಗೆ ವನ್ಯಜೀವಿ ಸಪ್ತಾಹವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ  ಆಚರಿಸಲಾಯಿತು. 

ಪ್ರಕೃತಿ ಪ್ರೇಮಿಗಳಿಗೆಲ್ಲರಿಗೂ ವನ್ಯಜೀವಿ ಸಪ್ತಾಹದ ಶುಭಾಶಯಗಳು. ಬದುಕು ಎಂದೂ ಹಸಿರಾಗಿರಲಿ...  

Thursday 2 October 2014

'ಗಾಂಧೀ ಜಯಂತಿ' ಹಾಗೂ 'ದಸರಾ ನಾಡ ಹಬ್ಬ' ಆಚರಿಸಲ್ಪಟ್ಟಿತು...

ದಿನಾಂಕ 2-10-2014 ರಂದು ನಮ್ಮ ಶಾಲೆಯಲ್ಲಿ "ಗಾಂಧೀ ಜಯಂತಿ ಹಾಗೂ ದಸರಾ ನಾಡ ಹಬ್ಬ"ವನ್ನು ಆಚರಿಸಲಾಯಿತು. ಶಾಲಾ SMC ಸ್ಥಳೀಯ ಸಂಪನ್ಮೂಲ ವ್ಯಕ್ತಿ  ಹಾಗೂ ಇಚಿಲಂಗೊಡ್ ಕ್ಷೀರೋತ್ಪಾದಕ ಸೊಸೈಟಿ ಅಧ್ಯಕ್ಷರಾಗಿರುವ  ಶ್ರೀ  C.T ಕೃಷ್ಣ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಪಿತ ಗಾಂಧೀಜಿಯ ತ್ಯಾಗಮಯ ಜೀವನವನ್ನು ಸ್ಮರಿಸಿದರು ಅಂತೆಯೇ ನಿರ್ಮಲ ಭಾರತ್ ಸ್ವಚ್ಚತಾ ಅಂದೋಲನದಲ್ಲಿ ಶಾಲಾ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ಕೊಟ್ಟರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ಬಾಸ್ ಕೆ ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶೋಭಾ.T ಶುಭ ಹಾರೈಸಿದರು...