Friday 27 January 2017

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ಇಂದು ಶಾಲಾ 
ಮಟ್ಟದಲ್ಲಿ ರಕ್ಷಕರು, ಹಳೆವಿದ್ಯಾರ್ಥಿಗಳು, ಊರ ಮಹನೀಯರು, ಸಾಮಾಜಿಕ ಕಾರ್ಯಕರ್ತರೊಂದಿಗೆ
ಮಕ್ಕಳೂ ಅಧ್ಯಾಪಕರೂ ಸೇರಿ "ಶಿಕ್ಷಣ ಸಂರಕ್ಷಣೆಯ" ಪ್ರತಿಜ್ಞೆಗೈದರು.
*********



Thursday 26 January 2017

68ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು
ಶ್ರದ್ದೆಯಿಂದ ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಗೀತ .ಕೆ
ಧ್ವಜಾರೋಹಣಗೈದರು. ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಮಾತನಾಡಿದರು.
ರಕ್ಷಕರು, ಸ್ಥಳೀಯ ಕ್ಲಬ್ ಸದಸ್ಯರು, ಹಳೆ
ವಿದ್ಯಾರ್ಥಿಗಳು ಮಕ್ಕಳಿಗೆ ಸಿಹಿ ಹಂಚಿ ಶುಭ ಹಾರೈಸಿದರು.
********


********

Wednesday 25 January 2017

ಕುಷ್ಟ ರೋಗ ನಿರ್ಮೂಲನಾ ಕಾರ್ಯಕ್ರಮದಂಗವಾಗಿ
ಯಸ್.ಯಸ್.ಎ ಸಹಯೋಗದಲ್ಲಿ ಸಮೀಪದ ಕುಂಬಳೆ, ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯರಿಂದ ಶಾಲಾ ಮಕ್ಕಳ ಅರೋಗ್ಯ ತಪಾಸಣೆ ನಡೆಯಿತು.